ಸಿಂಧೂ ಜಲ ಒಪ್ಪಂದದ ಅಮಾನತು: ಭಾರತ-ಪಾಕಿಸ್ತಾನ ಸಂಬಂಧದಲ್ಲಿ ಹೊಸ ಅಧ್ಯಾಯ ?
ಪ್ರಸ್ತಾವನೆ:
1947ರಲ್ಲಿ ಭಾರತದಿಂದ ಪಾಕಿಸ್ತಾನ ಬೇರ್ಪಟ್ಟ ನಂತರ, ಎರಡೂ ದೇಶಗಳ ನಡುವೆ ಸಾಕಷ್ಟು ಸಂಘರ್ಷಗಳು, ಯುದ್ಧಗಳು ಹಾಗೂ ರಾಜತಾಂತ್ರಿಕ ಉದ್ವೇಗಗಳು ನಡೆದಿವೆ. ಆದರೆ ಇದೇ ಮೊದಲ ಬಾರಿ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಲಾಗಿದೆ.
ಭಾರತ - ಪಾಕಿಸ್ತಾನ ನಡುವಿನ ಸಂಘರ್ಷಗಳು:
-
1947ರಿಂದ ಇಲ್ಲಿವರೆಗೆ ನಾಲ್ಕು ಯುದ್ಧಗಳು ನಡೆದಿವೆ.
-
ಅನೇಕ ಭಯೋತ್ಪಾದಕ ಕೃತ್ಯಗಳು, ವಾಗ್ವಾದಗಳು ವರದಿಯಾಗಿವೆ.
-
2016ರಲ್ಲಿ ಉರಿ ದಾಳಿಗೆ ಪ್ರತಿಯಾಗಿ ಸರ್ಜಿಕಲ್ ಸ್ಟ್ರೈಕ್,
-
2019ರಲ್ಲಿ ಪುಲ್ವಾಮಾ ದಾಳಿಗೆ ಪ್ರತಿಯಾಗಿ ಬಾಲಾಕೋಟ್ ವಾಯುದಾಳಿ.
-
ವೀಸಾ ನಿಯಮ ಬದಲಾವಣೆ, ರಾಜತಾಂತ್ರಿಕರು ವಾಪಸ್ ಕರೆಸಿಕೊಳ್ಳುವುದು ಮುಂತಾದ ಕ್ರಮಗಳು.
-
ಆದರೆ, ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿರುವುದು ಇದೇ ಮೊದಲು.
ಸಿಂಧೂ ನದಿ ವ್ಯವಸ್ಥೆಯ ಮಹತ್ವ:
-
ಸಿಂಧೂ ನದಿಯು ಅದರ ಐದು ಉಪನದಿಗಳನ್ನು ಒಳಗೊಂಡಿದೆ:
ಸಟ್ಲೇಜ್, ರಾವಿ, ಬ್ಯಾಸ್, ಝೇಲಮ್, ಚಿನಾಬ್. -
ಹಿಮಾಲಯದಲ್ಲಿ ಹುಟ್ಟುತ್ತವೆ → ಭಾರತ → ಪಾಕಿಸ್ತಾನ → ಅರಬ್ಬಿ ಸಮುದ್ರ.
-
ಎರಡೂ ರಾಷ್ಟ್ರಗಳು ಕೃಷಿ ಹಾಗೂ ನೀರಾವರಿ ಉದ್ದೇಶಗಳಿಗೆ ಬಳಸಿಕೊಳ್ಳುತ್ತವೆ.
1960ರ ಸಿಂಧೂ ಜಲ ಒಪ್ಪಂದ:
-
1960 ಸೆಪ್ಟೆಂಬರ್ 19 ರಂದು ಕರಾಚಿಯಲ್ಲಿ ಸಹಿ.
-
ವಿಶ್ವಬ್ಯಾಂಕ್ ಮಧ್ಯಸ್ಥಿಕೆ.
-
ಪೂರ್ವ ನದಿಗಳು → ಭಾರತ; ಪಶ್ಚಿಮ ನದಿಗಳು → ಪಾಕಿಸ್ತಾನ.
-
ಭಾರತಕ್ಕೆ 34 ಲಕ್ಷ ಎಕರೆ ಅಡಿಗಳಷ್ಟು ನೀರಿನ ಸಂಗ್ರಹ ಅನುಮತಿ.
ನಿಯಂತ್ರಿತ ಹರಿವಿನ ಅಂಶ:
-
ಪಶ್ಚಿಮ ನದಿಗಳ ಸ್ವಾಭಾವಿಕ ಹರಿವಿಗೆ ತಡೆ ಇಲ್ಲ.
-
ಆದರೆ ನಿಯಂತ್ರಿತ ಹರಿವಿನಲ್ಲಿ ಬಗ್ಲಿಹಾರ್ ಅಣೆಕಟ್ಟು ಮುಂತಾದ ಯೋಜನೆಗಳಿಂದ ನೀರನ್ನು ಸ್ಥಗಿತಗೊಳಿಸಬಹುದು.
-
ಈ ನೀರು ಪಾಕಿಸ್ತಾನದ ಕೃಷಿ, ಕುಡಿಯುವ ನೀರಿಗಾಗಿ ಮುಖ್ಯ.
ಅಣೆಕಟ್ಟುಗಳು ಹಾಗೂ ಯೋಜನೆಗಳ ಮಹತ್ವ:
-
ಪಕಲ್ ದುಲ್, ಸವಾಲ್ಕೋಟ್ನಂಥ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಿದರೆ:
-
ಹೆಚ್ಚು ನೀರು ಸಂಗ್ರಹ ಸಾಧ್ಯ
-
ಭಾರತಕ್ಕೆ ಹೆಚ್ಚು ಹಿಡಿತ ಸಿಗುತ್ತದೆ.
-
ಪರಿಶೀಲನೆಗೆ ಅನುಮತಿಯಿಲ್ಲದ ತೀರ್ಮಾನ:
-
2019: ಪುಲ್ವಾಮಾ ನಂತರ ಎಂಟು ಜಲವಿದ್ಯುತ್ ಯೋಜನೆಗಳಿಗೆ ಅನುಮೋದನೆ.
-
ಪಾಕಿಸ್ತಾನ ಅಧಿಕಾರಿಗಳು ಪರಿಶೀಲನೆಗೆ ಬರುವ ಅವಕಾಶವಿತ್ತು.
-
ಒಪ್ಪಂದ ಅಮಾನತಿನಿಂದ ಇನ್ನು ಪರಿಗಣನೆ ಬೇಕಿಲ್ಲ.
ಹೂಳೆತ್ತುವ ನಿಯಮದ ಬದಲಾವಣೆ:
-
ಹಿಂದಿನ ನಿಯಮ: ಆಗಸ್ಟ್ನಲ್ಲಿ ಮಾತ್ರ ಹೂಳೆತ್ತುವ ಅನುಮತಿ.
-
ಈಗ: ಯಾವ ಋತುವಿನಲ್ಲಿ ಬೇಕಾದರೂ ಸಾಧ್ಯ.
ದತ್ತಾಂಶ ಹಂಚಿಕೆ ಸ್ಥಗಿತ:
-
ಹರಿವಿನ ಬಗ್ಗೆ ಮಾಹಿತಿ ಹಂಚಿಕೆ ಒಪ್ಪಂದದ ಒಂದು ಅಂಶ.
-
ಇನ್ನು ಮುಂದೆ ಭಾರತವು ಮಾಹಿತಿ ಹಂಚಿಕೊಳ್ಳದೇ ಇರಬಹುದಾಗಿದೆ.
ಏಕಪಕ್ಷೀಯ ಅಮಾನತು – ಆಕ್ಷೇಪ:
-
ಒಪ್ಪಂದದ ಪ್ರಕಾರ:
-
ಬದಲಾವಣೆಗಾಗಿ ಭಾರತ, ಪಾಕಿಸ್ತಾನ ಹಾಗೂ ವಿಶ್ವಬ್ಯಾಂಕ್ ಅನುಮತಿ ಅಗತ್ಯ.
-
2022ರಲ್ಲಿ ಭಾರತ ನೋಟಿಸ್ ನೀಡಿತ್ತು.
-
-
ಪಾಕಿಸ್ತಾನ:
-
ಭಾರತ ಏಕಪಕ್ಷೀಯವಾಗಿ ತೀರ್ಮಾನಿಸುತ್ತಿದೆ – ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂಬ ಆರೋಪ.
-
ಅಟ್ಟಾರಿ – ವಾಘಾ ಗಡಿ ಮುಚ್ಚುವ ಪರಿಣಾಮ:
-
ಭಾರತ – ಪಾಕಿಸ್ತಾನ ನಡುವಿನ ಏಕೈಕ ಕಾನೂನುಬದ್ಧ ರಸ್ತೆ ಮಾರ್ಗ.
-
ಅಫ್ಗಾನಿಸ್ತಾನ ಕೂಡ ಇದರ ಮೂಲಕ ವಹಿವಾಟು ನಡೆಸುತ್ತದೆ.
-
ಗಡಿ ಮುಚ್ಚುವ ನಿರ್ಧಾರದಿಂದ:
-
ದ್ವಿಪಕ್ಷೀಯ ವ್ಯಾಪಾರದ ಮೇಲೆ ಪರಿಣಾಮ
-
ಅಫ್ಗಾನಿಸ್ತಾನ – ಭಾರತದ ವ್ಯವಹಾರದ ಮೇಲೆ ಬಿಕ್ಕಟ್ಟು.
-
-
2018 ನಂತರ ಸಂಬಂಧ ಹಳಸಿದ್ದರೂ ಸಣ್ಣ ಪ್ರಮಾಣದ ವ್ಯಾಪಾರ ಮುಂದುವರಿದಿತ್ತು.
Comments (0)